ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಣದ ಶಕ್ತಿಗಿಂತ ಮನೋಶಕ್ತಿಯು ಎಲ್ಲರಿಗೂ ಅಗತ್ಯ : ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಫೆಬ್ರವರಿ 27 , 2016
ಫೆಬ್ರವರಿ 27, 2016

ಹಣದ ಶಕ್ತಿಗಿಂತ ಮನೋಶಕ್ತಿಯು ಎಲ್ಲರಿಗೂ ಅಗತ್ಯ : ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ

ಚೇರ್ಕಾಡಿ : ``ಜಗತ್ತಿನಲ್ಲಿರುವ ಪ್ರತೀ ಜೀವಜಂತುವಿನ ಹುಟ್ಟು ಅನೀರೀಕ್ಷಿತ ಮತ್ತು ಆಕಸ್ಮಿಕ, ಆದರೆ ಸಾವು ಮಾತ್ರ ನಿರೀಕ್ಷಿತ ಮತ್ತು ಅನಿವಾರ್ಯ. ಪ್ರತಿ ಒಬ್ಬ ಮನುಷ್ಯನಿಗೂ ನಾನು ಒಂದಲ್ಲ ಒಂದು ದಿನ ಸಾಯುತ್ತೇನೆ ಎಂದು ಗೊತ್ತೇ ಇರುತ್ತದೆ ಆದರೆ ಯಾವಾಗ ಎಂದು ಗೊತ್ತಿಲ್ಲದೆ ಇರುವುದು ದೇವ ರಹಸ್ಯ. ಹುಟ್ಟು ಸಾವಿನ ಮಧ್ಯೆ ನಾವು ಇತರರಿಗೆ ಸಹಾಯಕರಾಗಿ ಬದುಕಿ ಆದರ್ಶರಾಗ ಬೇಕು. ಉಪಕಾರ ಮಾಡುವ ಬುದ್ದಿ ಇದ್ದರೂ ಮಾಡುವ ಅನುಕೂಲತೆ ಎಲ್ಲರಲ್ಲೂ ಇರುದಿಲ್ಲ. ಆದರೆ ಅಪಕಾರ ಮಾಡದಿರಲು ಎಲ್ಲರಿಗೂ ಸಾದ್ಯ. ಜೀವನದಲ್ಲಿ ಬರುವ ಅನೇಕ ಕಷ್ಟ ಪರಂಪರೆಯನ್ನು ಎದುರಿಸುವ ಮನೋಶಕ್ತಿಯನ್ನು ಪ್ರತೀ‌ಒಬ್ಬರೂ ಬಳಸಿಕೊಳ್ಳಬೇಕು. ತೋಳಿನಶಕ್ತಿ , ಹಣದ ಶಕ್ತಿಗಿಂತ ಇಂತಹ ಮನೋಶಕ್ತಿಯ ಅಗತ್ಯ ಇಂದಿನ ಯಾಂತ್ರಿಕ ಯುಗದಲ್ಲಿ ಎಲ್ಲರಿಗೂ ಅಗತ್ಯ`` ಎಂದು ಮಣಿಪಾಲ ಎಂ, ಐ. ಟಿ ಕಾಲೇಜಿನ ಪ್ರಾದ್ಯಾಪಕ, ಯಕ್ಷಗಾನ ಚಿಂತಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.

ಅವರು ಅಕಾಲದಲ್ಲಿ ನಿಧನ ಹೊಂದಿದ ಶಿಕ್ಷಕ ಚೇರ್ಕಾಡಿ ಅನಿಲ್ ಕುಮಾರ ಶೆಟ್ಟರ ಪ್ರಥಮ ವರ್ಷದ ಸಂಸ್ಮರಣೆಯಂದು ಸಂಸ್ಮರಣಾ ಭಾಷಣ ಮಾಡಿದರು. ಹೈಸ್ಕೂಲ್ ಶಿಕ್ಷಕರಾದ ಅನಿಲ್ ಕುಮಾರ ಶೆಟ್ಟರು ಆದರ್ಶ ಅಧ್ಯಾಪಕರಾಗಿ ಯಕ್ಷಗಾನ ಕಲಾಭಿಮಾನಿಯಾಗಿ ಬಹುಬೇಗ ನಮ್ಮನ್ನಗಲಿದರು ಅವರ ಅಗಲುವಿಕೆಯ ನೋವನ್ನು ಸಹಿಸುವ ಮನೋಶಕ್ತಿ ಅವರ ಕುಟುಂಬಕ್ಕೆ ಲಭಿಸಲಿ ಎಂದರು. ಹಿರಿಯ ಸಮಾಜ ಸೇವಕ ಕುಂಜಾಲು ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ವರ್ಷದ ಸಂಸ್ಮರಣಾ ಪ್ರಶಸ್ತಿಯನ್ನು ಮಂದಾರ್ತಿ ಮೇಳದ ಹಿರಿಯ ಕಲಾವಿದರಾದ ಆಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ರೂ 10000/- ಸಹಿತ ಪ್ರದಾನ ಮಾಡಲಾಯಿತು. ಸರ್ಫ಼ು ಸದಾನಂದ ಪಾಟೀಲ್ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ವಿಜಯ ಹೆಗ್ಡೆ, ಚೇರ್ಕಾಡಿ ಪಂಚಾಯತ್ ಅದ್ಯಕ್ಷ ಹರೀಶ ಹೆಗ್ಡೆ, ಸುದರ್ಶನ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ಹುಬ್ಬಳ್ಳಿ ಶಾಂಡಿಲ್ಯ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ನಿತ್ಯಾನಂದ ಸ್ವಾಮೀಜಿ ದಿವ್ಯ ಸಾನ್ನೀದ್ಯ ವಹಿಸಿದ್ದರು. ಅನಿಲ್ ಕುಮಾರ್ ಶೆಟ್ಟಿಯವರ ತಂದೆ ಕೊರ್ಗು ಶೆಟ್ತಿ ಜಯರಾಮ ಶೆಟ್ಟಿ, ಡಾ/ ಬಾಲಕ್ರಷ್ಣ ಶೆಟ್ಟಿ, ಉಮೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ. ಮಂಜುನಾಥ ನಾಯ್ಕ್ ಸ್ವಾಗತಿಸಿ ಶ್ರೀಕಾಂತ ಸಾಮಂತ್ ನಿರೂಪಿಸಿದರು. ಬಳಿಕ ಖ್ಯಾತ ಕಲಾವಿದರಿಂದ ಜಾಂಬವತಿ ಕಲ್ಯಾಣ ತಾಳಮದ್ದಳೆ ಕರ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟ ನೆರವೇರಿತು.






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ